ಜೀವನ ಪಟ

ಜೀವನ: ಬಣ್ಣ ಬಣ್ಣದಾ ಬಾಲಂಗೋಚಿ!
ಗಾಳಿಲಿ, ತೇಲಿ ತೇಲಿ ಸಾಗಿದೆ, ಪಟ ಪಟನೇ ಜೀವನಪಟದಿ-
ಬದುಕು ಭಾರ! ದಾರದಲಿ ಸೂತ್ರವಿದೆ, ಜೀವವಿದೆ, ಮರೀಬೇಡ!
ಜಗಕೆ ಸೂತ್ರವುಂಟು, ಜೀವ ಉಂಟು ನಂಬಬೇಡ.
*

ಹಾರಿ ಹಾರಿ, ರೆಕ್ಕೆ ಬಂದ, ಹಕ್ಕಿಯಾಗಲು ಸಾಧ್ಯವೇನು?
ತೇಲಿ ತೇಲಿ, ಕಡಲ ಮೇಲೆ, ಹಡುಗು ನೀ… ಎಂದರೇನು?
ಮೀನು ಮಿನುಗಿ, ಬಾನ ಚುಕ್ಕಿಯಾಗಿ, ಸಾಮಾನ್ಯನೇನು?
ಸಪ್ತ ಸಾಗರಗಳ, ಈಜುವುದು ಪುಟ್ಟ, ಮೀನೆಂದರೇನು?
ಜಗದ ಸೂತ್ರದಾರನ, ಕೈಗೊಂಬೆ ನೀ… ನಂಬುವೆಯೇನು?!
*

ಬಣ್ಣ ಬಣ್ಣದ, ಜಗದ ಕಣ್ಣ ಬಣ್ಣ, ತುಂಬಿದಾ ಅಣ್ಣನೆಲ್ಲಿಹನು??
ಹಾವಿನಂದದಿ, ತೆವಳುತಾ ಸಾಗಿಹ, ಜೀವನ ಪಟವೇ…
ಮುಗಿಲ ಮಾರಿಗೆ, ರಂಗು ತಂದ, ನಿಮಿಷವೇ…
ಸೂತ್ರದಾರನ ಆಟ ನಿಲ್ಲಿಸಿರೆ, ನೀ ಪಾತಾಳವೇ…
*

ಮುಂಜಾನೆ ಮಂಜಿನಂತೆ, ಜೀವನ ಪಟವು!
ಗುಡುಗು, ಸಿಡಿಲು, ಮಳೆ, ಗಾಳಿ, ಮಿಂಚಿನಂತೆ ಜೀವನ!
ಏರುಪೇರು, ನೀರ ಗುಳ್ಳೆ, ಹಗಲುರಾತ್ರಿ ನಿರಂತರ!
ಕಾಮನ ಬಿಲ್ಲಿನಂದದಿ, ಕ್ಷಣಿಕ ಜೀವನ ಯಾತ್ರೆಯು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧಾರಿಣಿ
Next post ಭ್ರಾತೃ ಕವಿ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys